ದೇಗುಲದಲ್ಲಿ ಅಪ್ಪಿದಾಗ ಬಳುಕುತ್ತಿದ್ದೆಯಲ್ಲ,
ನಿನ್ನಲ್ಲಿ ನಾಚಿಕೆಯೂ, ಒಪ್ಪಿಗೆಯೂ
ಒಟ್ಟೊಟ್ಟಿಗೇ ತುಳುಕುತ್ತಿದ್ದವು ಅಲ್ಲವೇನೆ?
ಬಳುಕೊ ಜಲಪಾತವ ಬರಸೆಳೆದು
ಕಾಯುವಂತೆ ಹುಟ್ಟುವ ಭಾವಗಳಿಗೆ
ಎಲ್ಲಿಂದಲೋ ತುಳುಕುವ ಸಾಲುಗಳಿಗೆ
ಕಾದು ಹದವಾಗುವುದೆ ಕವಿತೆ.
ಎದೆಯ ಹೂಕಾಡು ಮಾಲೆಯಾದಂತೆ
ಕವಿತೆಯೂ, ಒಲವೂ ಅರಳುವುದು
ಹೇಳಲಾಗುವುದಷ್ಟೆ ಎದೆಯಲ್ಲಿ ಉಳಿಯುವುದು
ಹೇಳಲಾಗದ್ದು ಆಗಸಕ್ಕೆ ತೆರಳುವುದು.
ಒಲಿದ ಮೇಲೆಯೇ ಅಲ್ಲವೇನೆ
ಎಲ್ಲ ತುಳುಕುವುದು, ಬಳುಕುವುದು?
>ರಾಘವೇಂದ್ರ,ಕವನ ಸೊಗಸಾಗಿದೆ…ಎದೆಯ ಹೂಕಾಡು ಮಾಲೆಯಾದಂತೆಕವಿತೆಯೂ, ಒಲವೂ ಅರಳುವುದುಹೇಳಲಾಗುವುದಷ್ಟೆ ಎದೆಯಲ್ಲಿ ಉಳಿಯುವುದುಹೇಳಲಾಗದ್ದು ಆಗಸಕ್ಕೆ ತೆರಳುವುದು.ಈ ಪದ್ಯದ ಪದ ಪ್ರಯೋಗ ಸುಂದರ….ಆಹಾಂ! ನನ್ನ ಬ್ಲಾಗಿನಲ್ಲಿ ಚಿಟ್ಟೆ ಯ ಬಗೆಗಿನ ಹೊಸ ಲೇಖನವಿದೆ…ನೋಡಿ…ಇಷ್ಟವಾದರೆ ನಾಲ್ಕು ಮಾತು ಕಾಮೆಂಟಿಸಿ….
>ರಾಘವೇಂದ್ರ,ಗ್ರಾಫಿನಲ್ಲಿಮೂಡುವ ನಿಮ್ಮ ಕವನಗಳು ಮೇಲ್ಮುಖವಾಗಿಯೇ ಸಾಗುತ್ತಿವೆ. ಅಭಿನಂದನೆಗಳು.
>ರೋಮಾಂಚನವಾಗುತ್ತಿದೆ ಸರ್,ಮೋಡ, ಮಳೆ, ಕಾಮನಬಿಲ್ಲು, ಎಳೆಬಿಸಿಲು, ತಂಗಾಳಿ….ಎಲ್ಲ ನೆನಪಾಗುತ್ತಿದೆ…
>ರೋಮಾಂಚನವಾಗುತ್ತಿದೆ ಸರ್,ಮೋಡ, ಮಳೆ, ಕಾಮನಬಿಲ್ಲು, ಎಳೆಬಿಸಿಲು, ತಂಗಾಳಿ….ಎಲ್ಲ ನೆನಪಾಗುತ್ತಿದೆ…
>ಈಗ ಕವಿ ಹ್ರುದಯದಲ್ಲಿ ಸಂಗೀತ ಆರಂಭಗೊಂಡಿದೆ ಅಲ್ಲವೇ….
>ಬದುಕು, ಪ್ರಕೃತಿ,ಮಳೆ ಹೀಗೆ ಸಮಸ್ತ ಹೊಳಪನ್ನೂ ತುಂಬಿಕೊಂಡ ನಿಮ್ಮ ಕವನಗಳನ್ನು ನಿತ್ಯ ಓದಿ ಅನುಭವಿಸ್ತೀನಿ. ಶುಭವಾಗಲಿ ಸರ್.-ಧರಿತ್ರಿ